ಅಧ್ಯಕ್ಷರಾಗಿ ಆಯ್ಕೆಯಾದರೆ ಸಿಡಬ್ಲ್ಯುಸಿ ಚುನಾವಣೆ: ಶಶಿ ತರೂರ್ ಘೋಷಣೆ

ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ತಾವು ಆಯ್ಕೆಯಾದರೆ ಕಾರ್ಯಕಾರಿ ಸಮಿತಿ ಚುನಾವಣೆ ನಡೆಸುತ್ತೇನೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಘೋಷಣೆ ಮಾಡಿದ್ದಾರೆ.
ಶಶಿ ತರೂರ್
ಶಶಿ ತರೂರ್
Updated on

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ತಾವು ಆಯ್ಕೆಯಾದರೆ ಕಾರ್ಯಕಾರಿ ಸಮಿತಿ ಚುನಾವಣೆ ನಡೆಸುತ್ತೇನೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಘೋಷಣೆ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಶಶಿ ತರೂರ್ ಅವರು, ತಾವು ಎಐಸಿಸಿ ಮುಖ್ಯಸ್ಥರಾದರೆ CWC (ಕಾರ್ಯಕಾರಿ ಸಮಿತಿ) ನಡೆಸುತ್ತೇನೆ. 25 ವರ್ಷಗಳಿಂದ ನಿಷ್ಕ್ರಿಯವಾಗಿರುವ ಸಂಸದೀಯ ಮಂಡಳಿಯ ಪುನಶ್ಚೇತನದ ಅಗತ್ಯವಿದ್ದು, ಅಸ್ತಿತ್ವದಲ್ಲಿರುವ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೆ ತರುವುದಾಗಿ ಹೇಳಿದ್ದಾರೆ.

'ಕಾಂಗ್ರೆಸ್ ಅಧಿಕಾರವನ್ನು ವಿಕೇಂದ್ರಿಕರಣಗೊಳಿಸಬೇಕು ಮತ್ತು ಪಕ್ಷದ ತಳಮಟ್ಟದ ಪದಾಧಿಕಾರಿಗಳಿಗೆ ನಿಜವಾಗಿಯೂ ಅಧಿಕಾರ ನೀಡಬೇಕು. ಈ ವರ್ಷದ ಆರಂಭದಲ್ಲಿ ಪಕ್ಷದ ಚಿಂತನ ಶಿಬಿರದಲ್ಲಿ ಸರ್ವಾನುಮತದಿಂದ ಒಪ್ಪಿಗೆ ಪಡೆದ ಉದಯಪುರ ಘೋಷಣೆಯನ್ನು ಸಂಪೂರ್ಣವಾಗಿ ಜಾರಿಗೊಳಿಸುವುದಾಗಿ ತಿರುವನಂತಪುರಂನ ಲೋಕಸಭಾ ಸಂಸದರೂ ಆಗಿರುವ ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಶಶಿ ತರೂರ್ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚುನಾವಣಾ ಸ್ಪರ್ಧೆಯಲ್ಲಿ ಉನ್ನತ ಸ್ಥಾನಕ್ಕೆ ಗೆದ್ದರೆ ಪಕ್ಷಕ್ಕಾಗಿ ಅವರ ಯೋಜನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಕಾರ್ಯಕಾರಿ ಸಮಿತಿಗೆ ಚುನಾವಣೆಯನ್ನು ಕರೆಯುವುದು ತಮ್ಮ ಮೊದಲ ಮತ್ತು  ಒಂದು ಪ್ರಮುಖ ಹೆಜ್ಜೆ ಎಂದು ನಾನು ಭಾವಿಸುತ್ತೇನೆ. ಇನ್ನೂ ಮುಂದೆ ಪ್ರಜಾಪ್ರಭುತ್ವ. ನಾನು ಅಸ್ತಿತ್ವದಲ್ಲಿರುವ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೊಳಿಸಲಿದ್ದೇನೆ, ಇದು CWC ಚುನಾವಣೆಗಳು ಮತ್ತು ಕಾಲು ಶತಮಾನದಿಂದ ನಿಷ್ಕ್ರಿಯವಾಗಿರುವ ಸಂಸದೀಯ ಮಂಡಳಿಗೆ ಪುನರುಜ್ಜೀವನದ ಅಗತ್ಯವಿರುತ್ತದೆ ಮತ್ತು ಸರ್ವಾನುಮತದಿಂದ ಒಪ್ಪಿಗೆ ಪಡೆದ ಉದಯ್‌ಪುರ ಘೋಷಣೆ ಜಾರಿ ಮಾಡುತ್ತೇನೆ ಎಂದು ತರೂರ್ ಹೇಳಿದರು.

 ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಚುನಾವಣೆಗಳನ್ನು ನಡೆಸುವುದು ಮತ್ತು ಸಂಸದೀಯ ಮಂಡಳಿಯ ಪುನಶ್ಚೇತನವು ತರೂರ್ ಸೇರಿದಂತೆ ಜಿ 23 ನಾಯಕರ ಗುಂಪಿನ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಅವರು 2020 ರಲ್ಲಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ದೊಡ್ಡ ಪ್ರಮಾಣದ ಸಾಂಸ್ಥಿಕ ಸುಧಾರಣೆಗಳನ್ನು ಕೋರಿ ಪತ್ರ ಬರೆದಿದ್ದರು. ಇದೀಗ ಶಶಿತರೂರ್ ಕೂಡ ಇದೇ ಅಂಶಗಳನ್ನು ಜಾರಿಗೆ ತರುವ ಕುರಿತು ಮಾತನಾಡುತ್ತಿದ್ದಾರೆ. 

ಉದಯ್ ಪುರ್ ಶಿಬಿರ ಘೋಷಣೆ
ಕಾಂಗ್ರೆಸ್ ಉದಯಪುರ ಘೋಷಣೆಯನ್ನು ಅಂಗೀಕರಿಸಿದೆ, ಇದರಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ವ್ಯಾಪಕ ಪ್ರಾತಿನಿಧ್ಯ ಮತ್ತು 'ಒಂದನ್ನು ಜಾರಿಗೊಳಿಸುವುದು ಸೇರಿದಂತೆ ಮುಂದಿನ ಸುತ್ತಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಪಕ್ಷವನ್ನು ಸಿದ್ಧಗೊಳಿಸಲು ವ್ಯಾಪಕವಾದ ಸಾಂಸ್ಥಿಕ ಸುಧಾರಣೆಗಳನ್ನು ಒಳಗೊಂಡಿದೆ. ಓರ್ವ ವ್ಯಕ್ತಿ, ಒಂದು ಪೋಸ್ಟ್' ಮತ್ತು 'ಒಂದು ಕುಟುಂಬ, ಒಂದು ಟಿಕೆಟ್' ನಿಯಮಗಳೂ ಇದರಲ್ಲಿ ಸೇರಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com