ಗೂಗಲ್ ಪ್ಲೇ ಸ್ಟೋರ್ 
ದೇಶ

ಕೇಂದ್ರ ಸರ್ಕಾರದ ಎಚ್ಚರಿಕೆ ಬೆನ್ನಲ್ಲೇ ಗೂಗಲ್ ಪ್ಲೇ ಸ್ಟೋರ್ ಗೆ ಕಮ್ ಬ್ಯಾಕ್ ಮಾಡಿದ ಭಾರತೀಯ ಆ್ಯಪ್ ಗಳು!

ಪಾವತಿ ವಿಚಾರವಾಗಿ ಭಾರತದ ಹತ್ತಾರು ಆ್ಯಪ್ ಗಳನ್ನು ತನ್ನ ಪ್ಲೇ ಸ್ಟೋರ್ ನಿಂದ ಕೈ ಬಿಟ್ಟಿದ್ದ ಗೂಗಲ್ ಇದೀಗ ಕೇಂದ್ರ ಸರ್ಕಾರದ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಭಾರತೀಯ ಆ್ಯಪ್ ಗಳಿಗೆ ಜಾಗ ಮಾಡಿಕೊಟ್ಟಿದೆ.

ನವದೆಹಲಿ: ಪಾವತಿ ವಿಚಾರವಾಗಿ ಭಾರತದ ಹತ್ತಾರು ಆ್ಯಪ್ ಗಳನ್ನು ತನ್ನ ಪ್ಲೇ ಸ್ಟೋರ್ ನಿಂದ ಕೈ ಬಿಟ್ಟಿದ್ದ ಗೂಗಲ್ ಇದೀಗ ಕೇಂದ್ರ ಸರ್ಕಾರದ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಭಾರತೀಯ ಆ್ಯಪ್ ಗಳಿಗೆ ಜಾಗ ಮಾಡಿಕೊಟ್ಟಿದೆ.

ಹೌದು..ಭಾರತೀಯ ಅಪ್ಲಿಕೇಶನ್‌ಗಳನ್ನು ಪಟ್ಟಿಯಿಂದ ತೆಗೆದುಹಾಕುವುದನ್ನು ಅನುಮತಿಸಲಾಗುವುದಿಲ್ಲ ಎಂಬ ಸರ್ಕಾರದ ಸ್ಪಷ್ಟ ಸೂಚನೆಯ ಬೆನ್ನಲ್ಲೇ ನೌಕ್ರಿ ಮತ್ತು 99 ಎಕರ್ ಸೇರಿದಂತೆ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದ್ದ ಕೆಲವು ಜನಪ್ರಿಯ ಭಾರತೀಯ ಅಪ್ಲಿಕೇಶನ್‌ಗಳನ್ನು ಗೂಗಲ್ ಮರುಸ್ಥಾಪಿಸಿದೆ. ಕೆಲವು ಆ್ಯಪ್‌ಗಳನ್ನು ಮರುಸ್ಥಾಪಿಸುವುದು ಸರ್ಕಾರದ ಸ್ಥಾನಕ್ಕೆ ಲಿಂಕ್ ಮಾಡಿಲ್ಲ. ಆದರೆ ಸಂಬಂಧಿಸಿದ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್ ಬಿಲ್ಲಿಂಗ್ ನೀತಿಗಳಿಗೆ ಅನುಗುಣವಾಗಿರುತ್ತವೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಇನ್ಫೋ ಎಡ್ಜ್ ಸಂಸ್ಥಾಪಕ ಸಂಜೀವ್ ಬಿಖ್‌ಚಂದಾನಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಅನೇಕ ಇನ್ಫೋ ಎಡ್ಜ್ ಅಪ್ಲಿಕೇಶನ್‌ಗಳು ಈಗ ಗೂಗಲ್ ಸಂಸ್ಥೆಯ ಅಪ್ಲಿಕೇಶನ್ ಮಾರುಕಟ್ಟೆ ಗೂಗಲ್ ಪ್ಲೇಸ್ಟೋರ್ ಗೆ ಮರಳಿವೆ ಎಂದು ಖಚಿತಪಡಿಸಿದ್ದಾರೆ. "ಹಲವು ಇನ್ಫೋ ಎಡ್ಜ್ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ಗೆ ಮರಳಿವೆ. (ಕಂಪೆನಿ ಎಂಡಿ ಮತ್ತು ಸಿಇಒ) ಹಿತೇಶ್ ಮತ್ತು ಇಡೀ ಇನ್ಫೋ ಎಡ್ಜ್ ತಂಡದ ನೇತೃತ್ವದಲ್ಲಿ ಉತ್ತಮ ಪ್ರಯತ್ನದಿಂದಾಗಿ ಇದು ಸಾಧ್ಯವಾಗಿದೆ. ಹಗಲುರಾತ್ರಿ ದುಡಿದು ಬಿಕ್ಕಟ್ಟು ನಿವಾರಿಸಿದ್ದಾರೆ ಎಂದು ಅವರು ಹೇಳಿದರು.

ಇನ್ನು ನಿನ್ನೆಯಷ್ಟೇ ಗೂಗಲ್ ಪ್ಲೇಸ್ಟೋರ್ ತನ್ನ ಬಿಲ್ಲಿಂಗ್ ನೀತಿಗೆ ಅನುಗುಣವಾಗಿಲ್ಲ ಎಂದು ಆರೋಪಿಸಿದ ಮ್ಯಾಟ್ರಿಮೋನಿ ಸೇರಿದಂತೆ ಭಾರತ ಮೂಲದ ಹಲವು ಆ್ಯಪ್ ಗಳನ್ನು ತೆಗೆದು ಹಾಕಿತ್ತು. ಇದಕ್ಕೆ ಬಲವಾಗಿ ಖಂಡಿಸಿದ್ದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಭಾರತೀಯ ಅಪ್ಲಿಕೇಶನ್‌ಗಳ ಪಟ್ಟಿಯಿಂದ ತೆಗೆದುಹಾಕುವುದನ್ನು ಅನುಮತಿಸಲಾಗುವುದಿಲ್ಲ ಮತ್ತು ಸಂಬಂಧಿಸಿದ ಟೆಕ್ ಕಂಪನಿ ಮತ್ತು ಸ್ಟಾರ್ಟ್‌ಅಪ್‌ಗಳನ್ನು ಮುಂದಿನ ವಾರ ಸಭೆಗೆ ಕರೆಯಲಾಗಿದೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದರು.

ಈ ಕುರಿತ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, 'ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ಭಾರತೀಯ ಆರ್ಥಿಕತೆಗೆ ಪ್ರಮುಖವಾಗಿದೆ ಮತ್ತು ಅವರ ಭವಿಷ್ಯವನ್ನು ನಿರ್ಧರಿಸಲು ಯಾವುದೇ ದೊಡ್ಡ ತಂತ್ರಜ್ಞಾನಕ್ಕೆ ಬಿಡಲಾಗುವುದಿಲ್ಲ. ಗೂಗಲ್ ನ ಬಿಲ್ಲಿಂಗ್ ನೀತಿ ಕುರಿತು ಆ್ಯಪ್‌ಗಳು ಮತ್ತು ಪ್ರಸಿದ್ಧ ಸ್ಟಾರ್ಟ್‌ಅಪ್ ಸಂಸ್ಥಾಪಕರು ಅಸಮಾಧಾನ್ಯ ವ್ಯಕ್ತಪಡಿಸುತ್ತಿದ್ದು, ಈ ಸಂಬಂಧ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದರು.

"ಭಾರತವು ತುಂಬಾ ಸ್ಪಷ್ಟವಾಗಿದೆ, ನಮ್ಮ ನೀತಿ ತುಂಬಾ ಸ್ಪಷ್ಟವಾಗಿದೆ, ನಮ್ಮ ಸ್ಟಾರ್ಟ್‌ಅಪ್‌ಗಳು ಅವರಿಗೆ ಅಗತ್ಯವಿರುವ ರಕ್ಷಣೆಯನ್ನು ಪಡೆಯುತ್ತವೆ. ವಿವಾದವನ್ನು ಪರಿಹರಿಸಲು ಸರ್ಕಾರವು ಮುಂದಿನ ವಾರ ಗೂಗಲ್ ಮತ್ತು ಅಪ್ಲಿಕೇಶನ್ ಡೆವಲಪರ್‌ಗಳನ್ನು ಡಿಲಿಸ್ಟ್ ಆಗಿರುವವರನ್ನು ಭೇಟಿ ಮಾಡಲಿದೆ. ನಾನು ಈಗಾಗಲೇ ಗೂಗಲ್‌ಗೆ ಕರೆ ಮಾಡಿದ್ದೇನೆ. ನಾನು ಈಗಾಗಲೇ ಪಟ್ಟಿಯಿಂದ ತೆಗೆದುಹಾಕಲಾದ ಅಪ್ಲಿಕೇಶನ್ ಡೆವಲಪರ್‌ಗಳಿಗೆ ಕರೆ ಮಾಡಿದ್ದೇನೆ. ನಾವು ಮುಂದಿನ ವಾರ ಅವರನ್ನು ಭೇಟಿ ಮಾಡುತ್ತೇವೆ. ಇದನ್ನು ಅನುಮತಿಸಲಾಗುವುದಿಲ್ಲ. ಈ ರೀತಿಯ ಡಿಲಿಸ್ಟಿಂಗ್ ಅನ್ನು ಅನುಮತಿಸಲಾಗುವುದಿಲ್ಲ" ಎಂದು ಹೇಳಿದರು.

ಏನಿದು ಪ್ರಕರಣ?

ಗೂಗಲ್ ಪ್ಲೇ ಸ್ಟೋರ್ ನಿಂದ ಮ್ಯಾಟ್ರಿಮೋನಿ ಆ್ಯಪ್ ಸೇರಿದಂತೆ ಭಾರತದ ಹಲವು ಆ್ಯಪ್ ಗಳಿಗೆ ಗೇಟ್ ಪಾಸ್ ನೀಡಲಾಗಿತ್ತು. ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಗೂಗಲ್‌ ಸಂಸ್ಥೆಯು (Google) ಪ್ಲೇಸ್ಟೋರ್‌ನಿಂದ (Play Store) ಭಾರತ್‌ ಮ್ಯಾಟ್ರಿಮೋನಿ ಆ್ಯಪ್ ಸೇರಿದಂತೆ ಹಲವು ಆ್ಯಪ್ ಗಳನ್ನು (Bharat Matrimony) ತೆಗೆದುಹಾಕಿತ್ತು.

ಗೂಗಲ್ ನ ಈ ಕಠಿಣ ನಡೆಗೆ ಕಾರಣ ಏನು?

ಗೂಗಲ್ ಆರ್ಥಿಕ ನಿಯಮಗಳ ಪ್ರಕಾರ ಪ್ಲೇ ಸ್ಟೋರ್ ನ ಆ್ಯಪ್ ಗಳ ಮೂಲಕ ಆಗುವ ಪೇಮೆಂಟ್ ಗಳಲ್ಲಿ ಇಂತಿಷ್ಟು ಪ್ರಮಾಣದ ಹಣವನ್ನು ಗೂಗಲ್ ಗೆ ಕಟ್ಟಬೇಕಾಗುತ್ತದೆ. ಈ ಹಣದ ವಿಚಾರವಾಗಿಯೇ ಉಂಟಾಗಿರುವ ಗೊಂದಲದಿಂದಾಗಿ ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಕೆಲ ಆ್ಯಪ್ ಗಳನ್ನು ತೆಗೆದುಹಾಕಿದೆ ಎಂದು ಹೇಳಲಾಗಿದೆ. ಈಗಾಗಲೇ ಭಾರತದ 10 ಕಂಪನಿಗಳ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕುವ ಪ್ರಕ್ರಿಯೆಗೆ ಗೂಗಲ್‌ ಚಾಲನೆ ನೀಡಿದೆ.

ಆ್ಯಪ್‌ಗಳ ಮೂಲಕ ಆಗುವ ಪೇಮೆಂಟ್‌ನಲ್ಲಿ ಶೇ.11ರಿಂದ ಶೇ.26ರಷ್ಟು ಹಣವನ್ನು ಗೂಗಲ್‌ಗೆ ಶುಲ್ಕವಾಗಿ ನೀಡಬೇಕು ಎಂಬ ನಿಯಮವಿದೆ. ಆದರೆ, ಇದನ್ನು ತಡೆಯಬೇಕು ಎಂಬ ದಿಸೆಯಲ್ಲಿ ಭಾರತದ ಸ್ಟಾರ್ಟಪ್‌ ಕಂಪನಿಗಳು ಪ್ರಯತ್ನಿಸುತ್ತಿವೆ. ಇನ್ನು ಸ್ಟಾರ್ಟಪ್‌ಗಳಿಗೆ ಯಾವುದೇ ವಿನಾಯಿತಿ ನೀಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಆದೇಶ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Video- ಒಮಾನ್ ಗೆ ಬಂದಿಳಿದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ: ಇಂದು ಹಲವು ಒಪ್ಪಂದಗಳಿಗೆ ಸಹಿ ನಿರೀಕ್ಷೆ

Operation Sindoor ವೇಳೆ ಭಾರತ ಸೋತಿತ್ತು: ನನ್ನ ಹೇಳಿಕೆಯಲ್ಲಿ ತಪ್ಪಿಲ್ಲ, ಕ್ಷಮೆ ಕೇಳಲ್ಲ ಎಂದ ಪೃಥ್ವಿರಾಜ್ ಚವಾಣ್

Suburban rail: ಕಂಟೋನ್ಮೆಂಟ್‌ನಲ್ಲಿ ಮರಗಳನ್ನು ಕಡಿಯದಂತೆ ಹೈಕೋರ್ಟ್ ಆದೇಶ

'ಭದ್ರಾ ಮೇಲ್ದಂಡೆ ಯೋಜನೆ ಅನುದಾನ, ನರೇಗಾ, ಜಲ ಜೀವನ್ ಮಿಷನ್ ಬಾಕಿ ಅನುದಾನ ಬಿಡುಗಡೆ ಮಾಡದ ಕೇಂದ್ರ ಸರ್ಕಾರ ದಿವಾಳಿಯಾಗಿದೆಯೇ?'

ಮಧ್ಯಾಹ್ನ ಬಿಸಿಯೂಟ: ಮಕ್ಕಳಿಗೆ ಮೊಟ್ಟೆ ನೀಡಲು ಸ್ವಂತ ಹಣ ಖರ್ಚು ಮಾಡುತ್ತಿರುವ ಸರ್ಕಾರಿ ಶಾಲಾ ಶಿಕ್ಷಕರು!

SCROLL FOR NEXT